ಭಾವನೆಯ ಬರೆದಿರುವೆ ಲೇಖನಿಯ ಎತ್ತದೆ
ಕಷ್ಟವನು ತಿಳಿಸಿರುವೆ ವೃತ್ತವನು ಸುತ್ತದೆ
ಅಂದು ಕಟ್ಟಿದೆ ನೀನು ನೆನಪಿನ ತೋರಣ
ದೂರವು ಇಂದೇಕೆ ಹೇಳಿ ಹೋಗು ಕಾರಣ...
ಕಷ್ಟವನು ತಿಳಿಸಿರುವೆ ವೃತ್ತವನು ಸುತ್ತದೆ
ಅಂದು ಕಟ್ಟಿದೆ ನೀನು ನೆನಪಿನ ತೋರಣ
ದೂರವು ಇಂದೇಕೆ ಹೇಳಿ ಹೋಗು ಕಾರಣ...
ಕಲಿಸಿದೆ ಬದುಕಲು ನೀನು ಜೊತೆಯಿಲ್ಲದೆ
ಬದುಕಿದು ಸಾಧ್ಯವೇ ನಿನ್ನ ನೆನಪಿಲ್ಲದೆ
ನೀನಿರದ ದಾರಿಯಲಿ ಈ ಬದುಕ ಪಯಣ
ಕೇಳುತಿದೆ ನಿನ್ನನ್ನು ಹೇಳಿ ಹೋಗು ಕಾರಣ....
ಬದುಕಿದು ಸಾಧ್ಯವೇ ನಿನ್ನ ನೆನಪಿಲ್ಲದೆ
ನೀನಿರದ ದಾರಿಯಲಿ ಈ ಬದುಕ ಪಯಣ
ಕೇಳುತಿದೆ ನಿನ್ನನ್ನು ಹೇಳಿ ಹೋಗು ಕಾರಣ....
ನೀ ಹಾಕಿದ ಗೆರೆಯ ನಾನೆಂದು ದಾಟೆನು
ನಿನ್ನ ಹೆಸರಿನ ವಿನಹ ಬೇರೇನು ಕರೆಯೆನು
ಈ ಮನದ ಮರುಳಿಗೆ ನಾ ತಾನೆ ಕಾರಣ
ಮೌನವು ನಿನಗೇಕೆ ಹೇಳಿ ಹೋಗು ಕಾರಣ...
ನಿನ್ನ ಹೆಸರಿನ ವಿನಹ ಬೇರೇನು ಕರೆಯೆನು
ಈ ಮನದ ಮರುಳಿಗೆ ನಾ ತಾನೆ ಕಾರಣ
ಮೌನವು ನಿನಗೇಕೆ ಹೇಳಿ ಹೋಗು ಕಾರಣ...
ನೋವಿನ ಲೆಕ್ಕದಲಿ ನಾ ಪಾಲು ಕೇಳುವೆ
ನಲಿವಿನ ವಿಷಯದಲ್ಲಿ ಎಲ್ಲವನು ನೀಡುವೆ
ಹೃದಯದ ಮಿಡಿತಕ್ಕೆ ನಿನ ಮಾತೆ ಭೂಷಣ
ಮೌನದ ಮಾತೇಕೆ ಹೇಳಿ ಹೋಗು ಕಾರಣ...
ನಲಿವಿನ ವಿಷಯದಲ್ಲಿ ಎಲ್ಲವನು ನೀಡುವೆ
ಹೃದಯದ ಮಿಡಿತಕ್ಕೆ ನಿನ ಮಾತೆ ಭೂಷಣ
ಮೌನದ ಮಾತೇಕೆ ಹೇಳಿ ಹೋಗು ಕಾರಣ...
-- ಶಿವು
No comments:
Post a Comment